
3rd September 2025
ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಾ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ, ಶ್ರೀ ಶಂಕರಲಿಂಗ ಶಿವಯೋಗಿಗಳ ಪುರಾಣ ಪ್ರಾರಂಭೋತ್ಸವ ಹಾಗೂ
ಶ್ರೀ ಶಂಕರಲಿಂಗ ಮಹಾತ್ಮೆ ಭಕ್ತಿ ಪ್ರದಾನ ನಾಟಕ ಗ್ರಂಥ ಲೋಕಾರ್ಪಣೆ ಹಾಗೂ ಧರ್ಮಸಭೆಯು ಇಂದು ದಿನಾಂಕ : 3-09-2025 ರಿಂದ 13-9-2025 ರ ವರೆಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಅನವರತ 11 ದಿನಗಳವರೆಗೆ ನಡೆಯುತ್ತದೆ ಎಂದು ಗೌರವಾಧ್ಯಕ್ಷರು ಶ್ರೀ ಬಾಲಚಂದ್ರಪ್ಪನವರು ಧರ್ಮಾಧಿಕಾರಿಗಳು, ಶ್ರೀ ಗುರು ಶಂಕರಲಿಂಗ ಮಠ, ಹಿರೇಮನ್ನಾಪೂರ ಇವರು ಮಾಹಿತಿ ನೀಡಿದ್ದಾರೆ.
ನಂತರ ಮಾತನಾಡಿದ ಅವರು, ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯುತ್ತದೆ. ನಾಳೆ ಬುಧುವಾರ ಸಾಯಂಕಾಲ 7 ಗಂಟೆಗೆ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಗೋಮಾತೆ ಪೂಜೆಯೊಂದಿಗೆ ಶ್ರೀ ಶಿವಯೋಗಿ ಶಂಕರಲಿಂಗ ಪುರಾಣ ಪ್ರಾರಂಭೋತ್ಸವ ಆಗಲಿದೆ.
ದಿನಾಂಕ: 4-9-2025 ರಂದು ಸಾಯಂಕಾಲ ನವದುರ್ಗಾ ಮಾತೆಯರ ಪಾದಪೂಜೆ ಕಾರ್ಯಕ್ರಮ ಇರುತ್ತದೆ.
ದಿನಾಂಕ: 5-9-2025 ರಂದು ಬೆಳಗ್ಗೆ 9=30ಕ್ಕೆ ಭಜನಾ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ.
ದಿನಾಂಕ: 7-9-2025 ರಂದು ಮುಂಜಾನೆ 9-30 ರಿಂದ ಕರೋಕೆ ಗಾಯನ ಕಾರ್ಯಕ್ರಮವು, ಸ್ವರಸಂಗಮ ಕಲಾವೃಂದ ಬೆಂಗಳೂರು ಹಾಗೂ ಶಿಲೆಗಳು ಸಂಗೀತವಾ ಹಾಡಿವೆ ಗೆಳೆಯರ ಬಳಗ ಕುಷ್ಟಗಿ ಮತ್ತು ಹಿರೇಮನ್ನಾಪೂರ, ನೀರಲೂಟಿ ಗ್ರಾಮದ ಸಕಲ ಸದ್ಭಕ್ತರ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗುವುದು.
ದಿನಾಂಕ: 8-09-2025 ರಂದು ಸಾಯಂಕಾಲ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಇರಲಿದೆ.
ದಿನಾಂಕ: 10-9-2025 ರಂದು ಮುಂಜಾನೆ 9-30ಕ್ಕೆ ಎಲ್ಲಾ ಮಹಿಳೆಯರಿಗಾಗಿ ಬಾಯಲ್ಲಿ ಚಮಚ ನಿಂಬೆಹಣ್ಣಿನ ಓಟದ ಸ್ಪರ್ಧೆ ಇರಲಿದೆ.
ದಿನಾಂಕ: 12-09-2025 ಸಾಯಂಕಾಲ 4-30 ಕ್ಕೆ ಕಳಸಾರೋಹಣ ಹಾಗೂ ರಾತ್ರಿ 8-30ಕ್ಕೆ ನಾಟಕ ಗ್ರಂಥ ಬಿಡುಗಡೆ ಇರಲಿದೆ.
13-09-2025 ರಂದು ಶ್ರೀ ಶಂಕರಲಿಂಗ ಶಿವಯೋಗಿಗಳ ಮೂಲಮಠದಿಂದ ಶಿವಯೋಗಿ ಬೆಟ್ಟಕ್ಕೆ ಕುಂಭ ಕಳಸದೊಂದಿಗೆ ಪಲ್ಲಕ್ಕಿ ಮೆರವಣಿಗೆ,
ಮಧ್ಯಾಹ್ನ 1 ಗಂಟೆಗೆ ಧರ್ಮಸಭೆ ಹಾಗೂ ಸಂಜೆ 5-45ಕ್ಕೆ ಲಘು ರಥೋತ್ಸವ ಮತ್ತು ರಾತ್ರಿ 9-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ದಿನಾಂಕ: 14-09-2025 ರಂದು ಮರಿಪ್ರಸ್ಥವಿದ್ದು ಶಿವಯೋಗಿ ಬೆಟ್ಟದಿಂದ ಮೂಲಮಠಕ್ಕೆ ಪಲ್ಲಕ್ಕಿ ಬಂದು ತಲುಪುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಕಲ ಸದ್ಭಕ್ತರು ಆಗಮಿಸಬೇಕೆಂದು ಶ್ರೀ ಗುರು ಶಂಕರಲಿಂಗ ಮಠ, ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ತಿಳಿಸಿದ್ದಾರೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ದಿನಾಂಕ: 7-9-2025 ರಂದು ಮುಂಜಾನೆ 9-30 ರಿಂದ ಕರೋಕೆ ಗಾಯನ ಕಾರ್ಯಕ್ರಮವು, ಸ್ವರಸಂಗಮ ಕಲಾವೃಂದ ಬೆಂಗಳೂರು ಹಾಗೂ ಶಿಲೆಗಳು ಸಂಗೀತವಾ
ಹಾಡಿವೆ ಗೆಳೆಯರ ಬಳಗ ಕುಷ್ಟಗಿ ಮತ್ತು ಹಿರೇಮನ್ನಾಪೂರ, ನೀರಲೂಟಿ ಗ್ರಾಮದ ಸಕಲ ಸದ್ಭಕ್ತರ ಸಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ ಅಂಗವಾಗಿ ಮೊದಲನೇ ದಿನ ಪುರಾಣದ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶ್ರೀಗಳವರಿಂದ ಚಾಲನೆ.
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ